ಜನಪದ ಉಳಿವಿಗಾಗಿ ಹುಟ್ಟಿತು
ನಮ್ಮ ಕನ್ನಡ ಜಾನಪದ ಪರಿಷತ್ತು
ಇದರ ಕಂದನೆ ಜಾನಪದ ಯುವ ಬ್ರಿಗೇಡ್
ತಾಯಿಯ ಜೊತೆ ಕೈಜೋಡಿಸಿತು
ಯುವಕರ ಧ್ವನಿಯು ಜನಪದವಾಯಿತು
ಜನಪದ ಶಕ್ತಿಯು ಈಗರಿವಾಯಿತು
ಯುವಶಕ್ತಿಯು ಕೈಜೋಡಿಸಿತು
ಇದೆಲ್ಲಾ ಜನಪದ ಯುವ ಬ್ರಿಗೇಡ್ ನಿಂದಾಯಿತು
ಯುವಕರನೆಲ್ಲ ಬಡಿದೆಬ್ಬಿಸಿತು
ಜಾನಪದ ಬೆಳೆಸಲು ಕರೆಯನ್ನಿಟ್ಟಿತು
ಜಾನಪದಕ್ಕಾಗಿ ಜೀವನ ಎಂದಿತು
ಯುವಶಕ್ತಿ ಇದಕ್ಕೆ ಕೈಜೋಡಿಸಿತು
ಕೋವಿಡ್ ತಾಂಡವ ದಲ್ಲಿ ಲೋಕಾರ್ಪಣೆಯಾಯಿತು
ನಮ್ಮ ಸಂಸ್ಕೃತಿ ನಾವೆ ಉಳಿಸೋಣ ಎಂದಿತು
ಡಾ.ಎಸ್.ಬಾಲಾಜಿಯವರು ಜಾನಪದ ಜಂಗಮರು
ಎರಡು ಸಾವಿರದ ಇಪ್ಪತ್ತರಲ್ಲಿ ಸ್ಥಾಪಿಸಿದರು
ಜಾನಪದ ಯುವ ಬ್ರಿಗೇಡ್ ಜಾನಪದ ಯುವ ಬ್ರಿಗೇಡ್
ಜಾನಪದ ರಕ್ಷಣೆಗಾಗಿ
ಜನಪದ ಯುವ ಬ್ರಿಗೇಡ್ ಜಾನಪದ ಯುವ ಬ್ರಿಗೇಡ್
ಜಾನಪದ ಕಲಾವಿದರಿಗಾಗಿ
ಜಾನಪದ ಯುವಕ ಜಾನಪದ ಯುವ ಬ್ರಿಗೇಡ್
ನಾಡಿನ ಯುವ ಶಕ್ತಿಗಾಗಿ
- ಕಿಶೋರ್ ಡಿ ಪಾಟೀಲ್
ಸಂಚಾಲಕರು ಕುಷ್ಟಗಿ ಜಾನಪದ ಯುವ ಬ್ರಿಗೇಡ್
No comments:
Post a Comment